ಬಣಕಲ್:ಪ್ರಮುಖ ವ್ಯವಹಾರ ಕೇಂದ್ರ ಬಣಕಲ್ ನಲ್ಲಿ ಪೊಲೀಸ್ ಇಲಾಖೆಯು ಉತ್ತಮವಾಗಿ ಕೆಲಸ ಮಾಡುತಿದ್ದರೂ ಪಾರ್ಕಿಂಗ್ ವ್ಯವಸ್ಥೆ, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಪಿ ಎಸ್ ಐ ರೇಣುಕಾ ತಿಳಿಸಿದರು.
ಬಣಕಲ್ ಪೊಲೀಸ್ ಠಾಣೆಯಲ್ಲಿ ಬುಧವಾರ ಆಯೋಜಿಸಿದ್ದ ಸಾರ್ವಜನಿಕ ಜನ ಸಂಪರ್ಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ಪೊಲೀಸ್ ಹಾಗೂ ಜನರ ಮದ್ಯೆ ಯಾವಾ ರೀತಿ ಸಂಪರ್ಕ ಇರಬೇಕು ಎಂಬುದರ ಬಗ್ಗೆ ಪಿ.ಎಸ್.ಐ ರೇಣುಕಾ ತಿಳಿಸಿದರು.
ಆಟೋ ಚಾಲಕರ ನ್ನು ಉದ್ದೇಶಿಸಿ ಮಾತನಾಡಿದ ಅವರು ಪ್ರಯಾಣಿಕರು ನಿಮ್ಮನ್ನು ನಂಬಿ ಆಟೋದಲ್ಲಿ ಕೂರುತ್ತಾರೆ ಅವರನ್ನು ಸುರಕ್ಷಿತವಾಗಿ ತಲುಪಿಸುವ ಕೆಲಸವನ್ನು ಚಾಲಕರು ಮಾಡಬೇಕು ಎಂದು ಸೂಚನೆ ನೀಡಿದರು. ಯಾರು ಕುಡಿದು ವಾಹನ ಓಡಿಸುವಂತಿಲ್ಲ ಕಾನೂನನ್ನು ಪಾಲಿಸಿದರೆ ನೀವು ನಮ್ಮನ್ನು ಗೌರವಿಸಿದಂತೆ ವೃತ್ತಿಯಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳಿ ಕಾನೂನನ್ನು ಉಲ್ಲಂಘಿಸಿ ಆಶಿಸ್ತು ತೋರಿದರೆ ಕಠಿಣ ಜರುಗಿಸಲಾಗುವುದು. ಎಲ್ಲರೂ ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು ಅಪ್ರಾಪ್ತರು ವಾಹನ ಚಾಲನೆ ಮಾಡುವಂತಿಲ್ಲ ಕಡ್ಡಾಯವಾಗಿ ವಾಹನಕ್ಕೆ ವಿಮೆ ಮಾಡಿಸಿರಬೇಕು ಪರ್ಮಟ್ ಹೊಂದಿರಬೇಕು. ಡಿಎಲ್ ಹೊಂದಿರಬೇಕು ತಪ್ಪಿದಲ್ಲಿ ಅಂತಹ ವಾಹನವನ್ನು ಜಪ್ತಿ ಮಾಡುವ ಎಚ್ಚರಿಕೆ ನೀಡಿದರು.
ಫುಟ್ ಪಾತ್ ಗಳನ್ನು ಜನ ಬಳಕೆಗಿಂತ ಅಂಗಡಿಯವರೆ ಬಳಕೆ ಮಾಡುತಿದ್ದಾರೆ ಎಂಬ ದೂರುಗಳು ಬಂದಿವೆ ಆದಷ್ಟು ಬೇಗ ಅವನ್ನು ತೆರವು ಗೊಳಿಸುವ ಕಾರ್ಯ ಮಾಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಹಲವು ಸಮಸ್ಯೆಗಳನ್ನು ವಿವರಿಸಿದರು.ಎಲ್ಲಾ ಸಮಸ್ಯೆ ಗಳನ್ನು ಆದಷ್ಟು ಬೇಗ ಬಗೆ ಹರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ ಎ.ಎಸ್.ಐ ಶಶಿ ಹಾಗೂ ಪೊಲೀಸ್ ಸಿಬ್ಬಂದಿ ವರ್ಗ, ಅಂಗಡಿ ಮಾಲೀಕರು, ಆಟೋ ಚಾಲಕರು ಹಾಗೂ ಮಾಲೀಕರು ಉಪಸ್ಥಿತರಿದ್ದರು.ವರದಿ :✍️ಸೂರಿ ಬಣಕಲ್