ಹೆಗ್ಗುಡ್ಲು ಗ್ರಾಮದಲ್ಲಿ ಕೆರೆಗೆ ಬಿದ್ದ ಜಿಂಕೆ:ಗ್ರಾಮಸ್ಥರಿಂದ ರಕ್ಷಣೆ

ತಾಲೂಕಿನ ಹೆಗುಡ್ಲು ಗ್ರಾಮದಲ್ಲಿ ಕೆರೆಗೆ ಬಿದ್ದ ಜಿಂಕೆಯೊಂದನ್ನು ಅರಣ್ಯ ಸಿಬ್ಬಂದಿ ರಕ್ಷಿಸಿದ್ದಾರೆ ಮುಂಜಾನೆ ಬೆಳಗ್ಗೆ ಜಿಂಕೆಯೊಂದು ನೀರು ಕುಡಿಯಲು ಕೆರೆಗೆ ಇಳಿದಿದೆ. ಕೆರೆಯಲ್ಲಿ ಕೆಸರು ತುಂಬಿದ್ದರಿಂದ ಜಿಂಕೆ ಮೇಲೆ ಬರಲಾಗದೆ ಸಿಲುಕಿ ಕೊಂಡಿದೆ. ಅದೃಷ್ಟವಷಾತ್ ವಿಶ್ವನಾಥ್ ಎಂಬುವವರು ಕೆಲಸಕ್ಕೆ ಹೋಗುವ ಸಮಯದಲ್ಲಿ ಜಿಂಕೆ ಕೆರೆಗೆ ಬಿದ್ದಿರುವುದು ಅವರ ಗಮನಕ್ಕೆ ಬಂದಿದೆ. ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಜಿಂಕೆಯನ್ನು ಜೀವಂತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.ಬಳಿಕ ಕೆರೆಯಿಂದ ಮೆಲೆಕೆತ್ತಿ ಹಗ್ಗದಿಂದ ಹೊರತೆಗೆಯುವ ವೇಳೆಗಾಗಲೇ ಜಿಂಕೆಯು ಕೈತಪ್ಪಿ ಸುರಕ್ಷಿತವಾಗಿ ಕಾಡಿಗೆ ಓಡಿದೆ.ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದ ಕಾರಣ ಜಿಂಕೆಯ ಪ್ರಾಣಕ್ಕೆ ಯಾವುದೇ ಅಪಾಯ ಉಂಟಾಗಿಲ್ಲ ಎಂದು ಹೇಳಲಾಗಿದೆ.

ಕಾರ್ಯಾಚರಣೆಯಲ್ಲಿ.ಅರಣ್ಯ ಸಿಬ್ಬಂದಿ ಮೌಸಿನ್, ಜಯಪ್ಪ, ಸಮಾಜ ಸೇವಕ ಆರಿಫ್ ಸುಧೀರ್ ಗೌಡ, ಸುರೇಶ್ ಗೌಡ, ಕಿರಣ್ ಗೌಡ, ಭರತ್, ಸುದರ್ಶನ್, ಇತರರು ಇದ್ದರು.