ಗಮನ ಸೆಳೆಯುತ್ತಿರುವ ಶ್ರೀ ಗುರು ವೈದ್ಯನಾಥ ಭಜನಾ ಮಂಡಳಿ ಮತ್ತಿಕಟ್ಟೆಯ ನೃತ್ಯ ಭಜನಾ ಕಾರ್ಯಕ್ರಮ

ಬಣಕಲ್ :ದೇವರ ಮೇಲಿನ ಭಕ್ತಿ ಆದ್ಯಾತ್ಮಿಕ ವಿಚಾರಗಳು ಮಹತ್ವದ ಪಾತ್ರ ವಹಿಸುತ್ತದೆ.ದೇವರ ಕೃಪೆಗೆ ಪಾತ್ರರಾಗಲು ಹಲವು ವಿಧಾನಗಳಿವೆ ಆದರೆ ಭಜನೆ ಸರಳವಾದ ಮಾರ್ಗ. ಆದರೆ ಆಧುನಿಕತೆಯ ಸ್ಥಿತ್ಯಂತರಕ್ಕೆ ಒಳಗಾದ ಯುವ ಜನತೆ ಆದ್ಯಾತ್ಮಿಕ. ಭಜನೆ ಹಾಡುವುದು ಕುಣಿತಭಜನೆ. ಜಾನಪದ ಗೀತೆಯಂತಹ ಧಾರ್ಮಿಕ ಚಟುವಟಿಕೆಯಿಂದ ದೂರವಾಗುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರ.ಮನೆ ಮನಗಳಲ್ಲಿ ಭಜನೆಯ ಭಕ್ತಿ-ಭಾವ ಕಡಿಮೆಗೊಳ್ಳುತ್ತಿರುವ ಈ ಆಧುನಿಕ ಕಾಲಘಟ್ಟದಲ್ಲಿ ಭಜನೆಯನ್ನು ಭಕ್ತಿ ಪೂರ್ವಕವಾಗಿ ಹಾಡುತ್ತಾ ಇನ್ನೊಬ್ಬರಿಗೂ ಭಜನೆ ಕಲಿಸುತ್ತಿರುವ ಮತ್ತಿಕಟ್ಟೆ ಯುವಕ ಯುವತಿಯರ ಕಾರ್ಯ ಈಗ ಎಲ್ಲಡೆಯಿಂದ ಮೆಚ್ಚುಗೆ ಗಳಿಸುತ್ತಿದೆ.ಇಂದು ಮಕ್ಕಳಿಗೆ ಕಲೆ-ಸಂಸ್ಕೃತಿ ಆಚಾರ ವಿಚಾರ ಆದ್ಯಾತ್ಮಿಕ ಕಳಿಸಿ ಕೊಡುವುದು ತಂದೆ ತಾಯಿಯರ ಆದ್ಯ ಕರ್ತವ್ಯವಾಗಿದೆ ಆದರೆ ಯುವ ಮನಸುಗಳು ವಿಚಲಿತಗೊಳ್ಳುತ್ತಿರುವ ಇಂದಿನ ಈ ಫ್ಯಾಷನ್ ಯುಗದಲ್ಲಿ ಆಧ್ಯಾತ್ಮಿಕ ಭಜನೆಯಂತಹ ಸಾಮೂಹಿಕ ಭಕ್ತಿ ಮಾರ್ಗಗಳು ನಶಿಸುತ್ತಿದೆ. ಈಗಿನ ಮಕ್ಕಳು ದೇವರನ್ನು ಸ್ಮರಿಸುವುದನ್ನು ಬಿಟ್ಟು ಮೊಬೈಲ್ ಗೇಮ್ ಇನ್ನಿತರ ಅನ್ಯ ಚಟುವಟಿಕೆಗಳಲ್ಲೇ ತಮ್ಮನ್ನು ತೋಡಗಿಸಿಕೊಳ್ಳುತ್ತಿರುವುದು ನಾವುಗಳು ಕಾಣುತ್ತೆವೆ.. ಮಕ್ಕಳಿಗೆ ಸಿನಿಮಾ ಹಾಡುಗಳಿಂದ ಬ್ರೇಕ್ ನೀಡಿ ದೇವರ ಸ್ಮರಣೆ ಮಾಡಲೆಂದೇ ಮತ್ತಿಕಟ್ಟೆ ಯುವಕ-ಯುವತಿಯರು ಸೇರಿ ಶ್ರೀ ಗುರು ವೈದ್ಯನಾಥ ಭಜನಾ ಮಂಡಳಿಯನ್ನು ಪ್ರಾರಂಭಿಸಿದ್ದಾರೆ.ಇದರಲ್ಲಿ ಶಾಲಾ ಮಕ್ಕಳಿಂದ ಹಿಡಿದು ಯುವಕ-ಯುವತಿಯರು ಪ್ರತಿ ನಿತ್ಯ ಸಂಜೆ ಭಜನೆಗಾಗಿಯೇ ಸಮಯ ಮೀಸಲಿಟ್ಟಿದ್ದಾರೆ . ಯುವಕರ ಈ ಕಾರ್ಯ ಗ್ರಾಮಸ್ಥರು ಹಾಗೂ ಪೋಷಕರ ಮೆಚ್ಚುಗೆಗಳಿಸಿದೆ.ಕುಣಿತ ಭಜನೇ ತರಬೇತಿ ಪಡೆದು ಸಜ್ಜಾದ ಭಜನಾ ಸಂಘದ ಸದಸ್ಯರ ಕುಣಿತ ಭಜನಾ ಕಾರ್ಯಕ್ರಮ ವನ್ನು ಕೊಪ್ಪದ ಶ್ರೀ ಬಬ್ಬು ಸ್ವಾಮಿ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ನಡೆಸುವ ಮೂಲಕ ಮೊದಲ ಕುಣಿತ ಭಜನೆಯನ್ನು ದೇವರಿಗೆ ಸಮರ್ಪಣೆ ಮಾಡಿ ದೇವರ ಕೃಪೆಗೆ ಪಾತ್ರರಾದರು.ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಾಗಿ ಶ್ರೀ ಗುರು ವೈದ್ಯನಾಥ ಭಜನಾ ಮಂಡಳಿ ಮತ್ತಿಕಟ್ಟೆ ಯುವಕ ಯುವತಿಯರಿಂದ ತಾಲ್ಲೂಕಿನೆಲ್ಲೆಡೆ ಭಜನಾ ಕಾರ್ಯಕ್ರಮ ನೀಡುವುದರ ಮೂಲಕ ದೇವರ ಕೃಪೆಗೆ ಪಾತ್ರರಾಗಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ .