ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಬಣಕಲ್ :ಮೂಡಿಗೆರೆ ತಾಲ್ಲೂಕಿನ ಬಣಕಲ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾ ಸಭೆಯು ಸಂಘದ ಅದ್ಯಕ್ಷರಾದ ಎ. ಆರ್. ಅಭಿಲಾಷ್ ಅವರ ಅಧ್ಯಕ್ಷತೆಯಲ್ಲಿ ಬಣಕಲ್ ನಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಭಿವೃದ್ಧಿ ವಿಚಾರವಾಗಿ ಯಾವುದೇ ರಾಜಕೀಯಾ ಮಾಡದೇ ಅಭಿವೃದ್ಧಿಗಾಗಿ ಎಲ್ಲರೂ ಕೈ ಜೋಡಿಸಬೇಕು, ದೇಶದ ಆರ್ಥಿಕ ಪ್ರಗತಿಯಲ್ಲಿ ಸಹಕಾರ ಸಂಘಗಳ ಪಾತ್ರ ಬಹು ಮುಖ್ಯವಾಗಿದೆ.ಸಹಕಾರ ಸಂಘಗಳಲ್ಲಿ ಸಾಲ ಪಡೆದ ಷೇರುದಾರರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದರೆ ಮಾತ್ರ ಸಂಘ ಸಂಸ್ಥೆಗಳು ಉಳಿದು ಅಭಿವೃದ್ಧಿ ಕಾಣಲು ಸಾಧ್ಯ. ಕೃಷಿಕರಿಗೆ ಬಡ್ಡಿ ರಹಿತ ಸಾಲ ನೀಡುವ ಸಹಕಾರ ಸಂಘಗಳು ವ್ಯಾಪಾರ, ಕೃಷಿ, ಹೈನುಗಾರಿಕೆಯಂತಹ ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿಯುವ ಜನತೆಗೆ ಅನುಕೂಲ ವಾಗುವುದು ಎಂದರು..
ಕಾರ್ಯಕ್ರಮದಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಎ ಆರ್ ಅಭಿಲಾಷ್, ಉಪಾಧ್ಯಕ್ಷರಾದ ಕೆ.ಪಿ.ರಮೇಶ್.ನಿರ್ದೇಶಕರುಗಳಾದ ಬಿ ಎಂ ಭರತ್. ರಂಗನಾಥ್. ಬಿ ಎಸ್ ಕಲ್ಲೇಶ್ .ಟಿ ಎಂ ಗಜೇಂದ್ರ. ಬಿ ಎಸ್ ವಿಕ್ರಂ. ಶಾಮಣ್ಣ. ಬಿ.ಬಿ. ಲಕ್ಷ್ಮಿ. ದಿಲ್ದಾರ್ ಬೇಗಂ.ಎಚ್.ಕೆ. ಮಮತ.ಬಿ. ಆರ್.ಚಂದ್ರಶೇಖರ್. ಬಿ. ಎಸ್. ನಾರಾಯಣ ಗೌಡ. ಬಿ. ಎ. ಪ್ರದೀಪ್ ಕುಮಾರ್. ಪ್ರಯಗ್. ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಪಿ.ನಿಶಾಂತ್ ಸೇರಿಂದತೆ ನೂರಾರು ಶೇರುದಾರರು ಇದ್ದರು..