ಬಣಕಲ್ : ನಜರೆತ್ ಶಾಲೆ, ಬಣಕಲ್ ನ ಬೆಳ್ಳಿ ಮಹೋತ್ಸವದ ಅಂಗವಾಗಿ ನಜರೆತ್ ಶಾಲೆ, ಬಣಕಲ್ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಚಿಕ್ಕಮಗಳೂರು ಇವರ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಾಂಶುಪಾಲರಾದ ಸಿಸ್ಟರ್ ಹಿಲ್ಡಾ ಲೋಬೋ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಆರ್.ಶ್ರೀನಿವಾಸ್, ಉಪಸಭಾಪತಿಗಳಾದ ಪ್ರದೀಪ್ ಗೌಡ, ಹಿರಿಯ ವೈದ್ಯರಾದ ಡಾ.ಮುರಳೀಧರ್ ಭಾಗವಹಿಸಿದ್ದರು.
ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ರಕ್ತದಾನದಿಂದ ರೋಗಿಗಳಿಗೆ ಮತ್ತು ರಕ್ತದಾನಿಗಳಿಗೆ ಆಗುವ ಪ್ರಯೋಜನಗಳ ಕುರಿತು ಡಾ.ಮುರಳೀಧರ್ ತಿಳಿಸಿದರು.
ಈ ಸಂದರ್ಭದಲ್ಲಿ ಐವತ್ತಕ್ಕೂ ಹೆಚ್ಚು ದಾನಿಗಳು ರಕ್ತದಾನ ಮಾಡಿದರು.
ನಜರೆತ್ ಶಾಲೆಯ ಸಿಬ್ಬಂದಿಗಳಾದ ಲವಕುಮಾರ್, ರೇಖಾ ಪೂರ್ಣೇಶ್, ವನಿತಾ ಲಕ್ಷ್ಮಣ್, ಹಲೀಮಾ, ರೇಷ್ಮಾ , ಸಿಸ್ಟರ್ ಸುಷ್ಮಿತಾ, ಡಯಾನಾ ಡಿಸೋಜ, ನಿಶ್ಚಿತ, ಆಸ್ತಿಕ್, ಸಂದೇಶ್, ಮಾನಸ,ರೆಡ್ ಕ್ರಾಸ್ ಸಂಸ್ಥೆಯ ಸುಂದರಗೌಡ, ರಸೂಲ್ ಖಾನ್, ಪ್ರವೀಣ್ ಬಣಕಲ್, ಹರ್ಷ ಹಳೇಕೋಟೆ, ಪೂರ್ಣೇಶ್ ಮತ್ತಾವರ, ಭರತ್ ಮಡ್ಡಿಕೆರೆ ಇತರರು ಉಪಸ್ಥಿತರಿದ್ದರು.
