ಜೆಸಿಐ ಬಣಕಲ್ ವಿಸ್ಮಯ ಸಂಸ್ಥೆ ವತಿಯಿಂದ ಬಗ್ಗಸಗೋಡು ಹಿರಿಯ ಪ್ರಾಥಮಿಕ ಪಾಠಶಾಲೆಯ ವಿದ್ಯಾರ್ಥಿಗಳಿಗೆ ನೋಟ್ಬುಕ್ ವಿತರಣೆ ಮಾಡಿದರು.
ಪುಸ್ತಕವನ್ನು ಬಗ್ಗಸಗೋಡಿನ ಶ್ರೀಮತಿ ಜಯಮ್ಮ ಕುಟುಂಬದ ವತಿಯಿಂದ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಶರತ್ ಗೌಡ ಫಲ್ಗುಣಿ, ಲೇಡಿ ಜೇಸಿ ಅಧ್ಯಕ್ಷರಾದ ಶ್ರೀಮತಿ ಅಶ್ವಿನಿ ಶರತ್, ಉಪಾಧ್ಯಕ್ಷರಾದ ಶ್ರೀಮತಿ ಮದುರ ಕವೀಶ್, ದಾನಿಗಳಾದ ಶ್ರೀ ಬಿ ಪಿ ನಯನ್, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ರಘುನಾಥ್, ಶಿಕ್ಷಕಿಯರಾದ ಶ್ರೀಮತಿ ವೀಣಾ ಮತ್ತು ಶ್ರೀಮತಿ ಪ್ರೇಮಾ ಅವರು ಉಪಸ್ಥಿತರಿದ್ದರು.
