ಮೂಡಿಗೆರೆ :ಎರಡು ಕೋಟಿ ಅನುಧಾನದಲ್ಲಿ ಮೂಡಿಗೆರೆ ತಾಲೂಕಿನ ಮರ್ಕಲ್ ಗ್ರಾಮದ ರಸ್ತೆ ಕಾಮಗಾರಿಯನ್ನು ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂ.ಪಿ. ಕುಮಾರಸ್ವಾಮಿ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಎಲ್ಲಾ ಗ್ರಾಮೀಣ ರಸ್ತೆಗಳಿಗೆ ಅನುಧಾನ ಮಂಜುರಾಗಿದ್ದು ಟೆಂಡರ್ ಪ್ರಕ್ರಿಯೆ ಮುಕ್ತಾಯವಾಗಿದ್ದು ಶೀಘ್ರದಲ್ಲಿ ಕೆಲಸ ಆರಂಭಿಸಲು ಹಾಗೂ ಉತ್ತಮ ಗುಣಮಟ್ಟದ ರಸ್ತೆ ಮಾಡಲು ಗುತ್ತಿಗೆದಾರರಿಗೆ ಮತ್ತು ಅಧಿಕಾರಿಗಳಿಗೆ ಸೂಚಿಸಲಾಗಿದೆ,ಮಳೆ ಅಧಿಕವಾಗಿ ಬೀಳುವ ಮೂಡಿಗೆರೆ ತಾಲೂಕಿನ ಅನೇಕ ಭಾಗಗಳಲ್ಲಿ ಕಾಂಕ್ರಿಟಿಕರಣ ಮಾಡಲಾಗುವುದು ಕಡಿಮೆ ಮಳೆ ಬೀಳುವ ಜಾಗದಲ್ಲಿ ಡಾಂಬರೀಕರಣ ಮಾಡಲಾಗುವುದು ಎಂದರು
ಮರ್ಕಲ್ ಗ್ರಾಮದ ರಸ್ತೆಗೆ ಎರಡು ಕೋಟಿ ಅನುಧಾನ,ಉಲ್ಲಾರಕಲ್ಲು ಬಪ್ಪಳಿಕೆ ರಸ್ತೆಗೆ 15 ಲಕ್ಷ, ವಾಟೇಖಾನ್ ಹೊಸ್ಕೆರೆ ರಸ್ತೆಗೆ 10 ಲಕ್ಷ, ಮಕ್ಕಿಮನೆ ಸಂಪಿಗೆ ಖಾನ್ ರಸ್ತೆಗೆ 10 ಲಕ್ಷ ಮಂಜೂರಾಗಿದ್ದು ,ಕೂಡಲೇ ಕೆಲಸ ಆರಂಭಿಸಲು ಸೂಚಿಸಲಾಗಿದೆ,ಈ ರಸ್ತೆಯನ್ನು ಶಾಸಕರು ವೀಕ್ಷಿಸಿದರು
ಬಾಳೂರು ಹೋಬಳಿ ಬಿಜೆಪಿ ಅಧ್ಯಕ್ಷ ಮರ್ಕಲ್ ವಿಜೇಂದ್ರ, ನಿಡುವಾಳೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರುತಿ ,ಉಪಾಧ್ಯಕ್ಷ ನವೀನ್ ಹಾವಳಿ, ಬಿಜೆಪಿ ರೈತ ಮೋರ್ಚಾ ಕಾರ್ಯದರ್ಶಿ ಪರೀಕ್ಷಿತ್ ಜಾವಳಿ, ಬಿಜೆಪಿ ಮುಖಂಡರಾದ ಸತೀಶ್ ಬಾಳೂರು, ರಘುಪತಿ, ದೀಪಕ್,ಶಶಿಕುಮಾರ್, ಯೋಗೇಶ್,ಗೌತಮ್ ಮರ್ಕಲ್,ಸಂತೋಷ್ ಕಾಗಿನಕೊಂಡ,ಪ್ರವೀಣ್ ಮರ್ಕಲ್
