ಮೂಡಿಗೆರೆ :ಬಿಜೆಪಿ ಯುವಮೋರ್ಚಾ ವತಿಯಿಂದ ಇಂದು ಮದ್ಯಾಹ್ನ 1 ಗಂಟೆಗೆ ಮೂಡಿಗೆರೆ ನಗರದಲ್ಲಿ ಅಮರ ಜವಾನ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು. ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರನ್ನು ಸ್ಮರಿಸಿಕೊಳ್ಳಲಾಯಿತು. ಈ ಮೂಲಕ ಫೆಬ್ರವರಿ 14 ದೇಹಪ್ರೇಮಕ್ಕಲ್ಲ ದೇಶಪ್ರೇಮಕ್ಕೆ , ಪರಕೀಯ ಸಂಸ್ಕೃತಿಯ ಪ್ರೇಮಿಗಳ ದಿನಾಚರಣೆಗೆ ಬದಲಾಗಿ ದೇಶಪ್ರೇಮಿಗಳ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪರಿವಾರದ ಮುಖಂಡರು, ಚುನಾಯಿತ ಜನಪ್ರತಿನಿಧಿಗಳು, ಯುವಮೋರ್ಚಾ ಪದಾಧಿಕಾರಿಗಳು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ತಾಲೂಕು ಅಧ್ಯಕ್ಷರು ಅಭಿನಾಶ್ ಜನ್ನಾಪುರ ಜಿಲ್ಲಾ ಉಪಾಧ್ಯಕ್ಷರಾದ ನಯನ್ ಜೆಎಸ್ ರಘು ಅಧ್ಯಕ್ಷರು ಧರಂಪಲ್ ಜಿಲ್ಲಾ ಕಾರ್ಯದರ್ಶಿ ಮನೋಜ್ ಹಳೆಕೋಟೆ ಮೋರ್ಚಾ ಜಿಲ್ಲಾ ಉಪಾಧ್ಯಕ್ಷರು ಸಂಜಯ್ ಕೊಟ್ಟಿಗೆಹಾರ ತಾಲೂಕು ಪ್ರಧಾನ ಕಾರ್ಯದರ್ಶಿ ಅನಿಲ್ ಉಪಾಧ್ಯಕ್ಷರುಗಳಾದ ಸಚಿನ್ ನಯನ ಊರ್ ಬಗ್ಗೆ ವೀರೇಂದ್ರ ಜನ ಪುರ ಸಂದರ್ಶ ಮನೋಜ್ ದೀಕ್ಷಿತ್ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು