ಚಿಕ್ಕಮಗಳೂರು :ಅದು ಚಿಕ್ಕಮಗಳೂರಿನ ಪ್ರತಿಷ್ಠಿತ ಹಾಗೂ ಹಳೆಯ ಚಿತ್ರಮಂದಿರ. ಅಣ್ಣಾವ್ರು, ವಿಷ್ಣುವರ್ಧನ್, ಅಂಬರೀಶ್ ಚಿತ್ರಗಳು ರಿಲೀಸ್ ಆದ್ರೆ ಇದೇ ಚಿತ್ರಮಂದಿರದಲ್ಲಿ ರಿಲೀಸ್ ಆಗಿ ಶತದಿನೋತ್ಸವ ಆಚರಿಸುತ್ತಿದ್ದವು. ಯಾವುದೇ ಸ್ಟಾರ್ ನಟರ ಚಿತ್ರ ಬಿಡುಗಡೆಯ ದಿನ ಈ ಚಿತ್ರಮಂದಿರದ ಮುಂದೆ ಹಬ್ಬ ಆಚರಿಸುತ್ತಿದ್ದರು. ಆದರೆ ಈಗ ಆ ಚಿತ್ರಮಂದಿರ ಇತಿಹಾಸದ ಪುಟ ಸೇರಿದೆ. 4 ದಶಕಗಳ ಕಾಲ ಕನ್ನಡ ಚಿತ್ರಗಳನ್ನಷ್ಟೇ ಪ್ರದರ್ಶಿಸಿದ್ದ ಗುರುನಾಥ ಚಿತ್ರಮಂದಿರ ಈಗ ತನ್ನ ಆಟ ಮುಗಿಸಿದೆ
ಸುದೀರ್ಘವರ್ಷಗಳ ಕಾಲ ಕನ್ನಡ ಚಿತ್ರಗಳನ್ನೇ ಪ್ರದರ್ಶಿಸಿ, ಹಿಟ್ಗಳ ಸಂಭ್ರಮಾಚರಣೆಗೆ ಸಾಕ್ಷಿಯಾಗಿದ್ದ ಈ ಗುರುನಾಥ ಇನ್ನು ನೆನಪು ಮಾತ್ರ.
ಚಿಕ್ಕಮಗಳೂರಿನ ಗುರುನಾಥ ಚಿತ್ರಮಂದಿರ ಅಂದರೆ ಥಟ್ ನೆನಪಾಗೋದು ಏಯ್… ಅಲ್ಲಿ ಕನ್ನಡ ಚಿತ್ರಗಳಿಗೆ ಮಣೆ ಹಾಕುತಿದ್ದ ಚಿತ್ರಮಂದಿರ ಅಲ್ವಾ? ಎಂದೆಲ್ಲ ಮಾತು ಕೇಳಿ ಬರೋ ಏಕೈಕ ಚಿತ್ರಮಂದಿರ ಅಂದ್ರೆ ಅದು ಗುರುನಾಥ ಚಿತ್ರಮಂದಿರ. ಆದರೆ ಈ ಹೆಸರಾಂತ ಚಿತ್ರಮಂದಿರ ಇತಿಹಾಸದ ಪುಟ ಸೇರುತ್ತಿದೆ. ಮುಂದಿನ ದಿನಗಳಲ್ಲಿ ಹೀಗೆ ಕೊರೋನ ಮುಂದುವರೆದು ಚಿತ್ರಮಂದಿರಗಳ ಹಾಗೂ ಚಿತ್ರೋದ್ಯಮದ ಸಹಾಯಕ್ಕೆ ಸರ್ಕಾರಗಳು ನಿಲ್ಲದಿದ್ದರೆ ಸಂಪೂರ್ಣ ಉದ್ಯಮವೇ ನೆನಪಾಗುವುದರಲ್ಲಿ ಸಂದೇಹವಿಲ್ಲ.
