ಮೂಲಭೂತ ಸೌಲಭ್ಯ ವಂಚಿತ ನೆಲ್ಯಾಡಿ ಗ್ರಾಮದ ಪರಿಶಿಷ್ಟ ಕಾಲೋನಿಗೆ ಲ್ಯಾಂಪ್ಸ್ ಅಧ್ಯಕ್ಷರ ಭೇಟಿ

ಮೂಡಿಗೆರೆ ತಾಲ್ಲೂಕಿನ ಬಣಕಲ್ ಗ್ರಾಮಪಂಚಾಯತಿ ವ್ಯಾಪ್ತಿಯ ಹೆಗ್ಗೋಡು ಸಮೀಪದ ನೆಲ್ಯಡಿ ಗ್ರಾಮದ ಪರಿಶಿಷ್ಟ ವರ್ಗದ ಕಾಲೋನಿಗೆ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳದ ಅದ್ಯಕ್ಷರಾದ ಮುತ್ತಪ್ಪ ಮೂಡಿಗೆರೆ ಲ್ಯಾಂಪ್ ಸಹಕಾರ ಸಂಘದ ಅದ್ಯಕ್ಷರಾದ ಸುಂದರ್ ಕುಮಾರ್ ಹಾಗು ಜಿಲ್ಲಾ ಗಿರಿಜನ ಅಬಿರುದ್ದಿ ಇಲಾಖೆಯ ಅಧಿಕಾರಿ ಮಲ್ಲಿಕಾರ್ಜುನ್ ಭೇಟಿನೀಡಿದರು ಈ ಸಂದರ್ಭದಲ್ಲಿ ನೆಲ್ಯಡಿ ಗ್ರಾಮದ ಗಿರಿಜನರು ಸಮಸ್ಸೆಗಳ ಆಗರವನ್ನೇ ಅಧಿಕಾರಿಗಳ ಮುಂದೆ ಬಿಚ್ಚಿಟ್ಟರು ನಾವುಗಳು ವಾಸ ಮಾಡುವ ಗ್ರಾಮಕ್ಕೆ ರಸ್ತೆ ಕುಡಿಯುವ ನೀರು ವಾಸದ ಮನೆ ಸೇರಿದಂತೆ ಹಲವಾರು ಮೂಲಭೂತ ಸೌಲಬ್ಯಗಳಿಂದ ವಂಚಿತ ರಾಗಿದ್ದೇವೆ ನಾವುಗಳು ಸರಕಾರಕ್ಕೆ ನಮ್ಮ ಬೇಡಿಕೆಗಳನ್ನು ಹಲವುಬಾರಿ ಸರಕಾರದ ಗಮನಕ್ಕೆ ತಂದರೂಸಹ ಪ್ರಯೋಜನ ವಾಗಿಲ್ಲ ಸಂಬಂದಪಟ್ಟ ಗಿರಿಜನ ಇಲಾಖೆಯವರು ಸಹ ನಮ್ಮತ್ತ ಗಮನ ಹರಿಸುತ್ತಿಲ್ಲ ನಮ್ಮ ಮಕ್ಕಳು ಅಂಗನವಾಡಿಗೆ ಹೋಗಲು ಸುಮಾರು ಏಳು ಕಿಲೋಮಿಟರ್ ಕಾಡಿನೋಳಗಡೆ ನಡೆಯಬೇಕು ನಮಗೆ ವಾಸ ಮಾಡಲು ಮನೆಇಲ್ಲದೆ ಟೆಂಟ್ ಮನೆಗಳಲ್ಲಿ ವಾಸ ಮಾಡುತ್ತಿದ್ದೇವೆ ಪರಿಶಿಷ್ಟ ವರ್ಗದವರಿಗೆ ಮೀಸಲಿಟ್ಟ ಅನುದಾನ ಸರಿಯಾದ ರೀತಿಯಲ್ಲಿ ಅನುಷ್ಠಾನ ವಾಗುತ್ತಿಲ್ಲ ಈ ದೇಶದಲ್ಲಿ ಆದಿವಾಸಿಗಳಿಗೆ ಸಾಮಾಜಿಕವಾಗಿ ಬದುಕುವ ಹಕ್ಕಿಲ್ಲವೇ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೂಂಡರು ಈ ಸಂದರ್ಭದಲ್ಲಿ ಮಾತನಾಡಿದ ಗಿರಿಜನ ಅಭಿರುದ್ದಿ ಅಧಿಕಾರಿ ಮಲ್ಲಿಕಾರ್ಜುನ್ ನಿಮ್ಮ ಭೇಡಿಕೆಗಳನ್ನು ಮೆಲಾದಿಕಾರಿಗಳ ಗಮನಕ್ಕೆ ತಂದು ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು ಈ ಸಂದರ್ಭದಲ್ಲಿ ಲ್ಯಾಂಪ್ಸ್ ನಿರ್ದೆಶಕ ವಸಂತ ಬಿಜೆಪಿ ಮುಖಂಡರಾದ ರಕ್ಷಿತ್ ಗಿರಿಜನ ಮುಖಂಡರಾದ ರಘು ಲೋಹಿತ್ ಆನಂದ ಮುಂತಾದವರಿದ್ದರು