ಶಾಲೆಗೆ ಹೋಗಲು ಬಸ್ ಇಲ್ಲ ಬಾಡಿಗೆ ಕೊಡಲು ಕಾಸಿಲ್ಲ!ಸಮಯಕ್ಕೆ ಸರಿಯಾಗಿ ಬಾರದ ಮತ್ತಿಕಟ್ಟೆ ಬಸ್ ಶಾಲಾ ವಿದ್ಯಾರ್ಥಿಗಳ ಅಳಲು

ಶಾಲೆ-ಕಾಲೇಜಿಗೆ ಹೋಗಲು ನಾವು ಸಿದ್ಧರಾಗಿದ್ದೇವೆ. ಆದರೆ ಇಲ್ಲಿ  ಸರಿಯಾದ ಸಮಯಕ್ಕೆ ಬಸ್‌ ಬರುತ್ತಿಲ್ಲ. ಖಾಸಗಿ ವಾಹನ ಮಾಡಿಕೊಂಡು ಹೋಗುವಷ್ಟು ಶಕ್ತಿ ನಮಗಿಲ್ಲ. ಇದು ಬಾಳೂರು ಮತ್ತಿಕಟ್ಟೆ ದಾಸರ ಹಳ್ಳಿ ಪರಿಸರದ ನೂರಾರು ಮಕ್ಕಳಿಂದ ಕೇಳಿ ಬಂದ ಅಳಲು
ಶಾಲಾ ಕಾಲೇಜಿಗೆ ಮಕ್ಕಳು ತೆರಳಲು ಆರಂಭಿಸಿದ್ದಾರೆ. ಶಾಲಾರಂಭ ಆಗುತ್ತಿದ್ದಂತೆ ತಾ|ನಲ್ಲಿ  ಸಂಚಾರ ವ್ಯವಸ್ಥೆ ಯಲ್ಲಿನ ತಾಪತ್ರಯಗಳು  ಎಲ್ಲೆಡೆಯಿಂದ ಕೇಳಿ ಬರುತ್ತಿವೆ.  ಸಂಚಾರ ಸಮಸ್ಯೆ ನಿವಾರಿಸಿ ಎಂದು ಮಕ್ಕಳು  ಗೋಳು ತೋಡಿಕೊಂಡಿದ್ದಾರೆ. ತಾಲೂಕಿನ ಬಣಕಲ್ ಮತ್ತಿಕಟ್ಟೆ ಬಾಳೂರು ಈ ಭಾಗದಿಂದ ನಗರದ  ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಕಲಿಕೆಗೆಂದು ಸುಮಾರು 100ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಬರುತ್ತಿದ್ದಾರೆ.   ಆದರೆ ಇವರಿಗೆ ಸೂಕ್ತ ಬಸ್‌ ವ್ಯವಸ್ಥೆ ಇಲ್ಲ.  ಆಟೋರಿಕ್ಷಾ ಬಾಡಿಗೆ ಮಾಡಿಕೊಂಡು ಶಾಲೆಗೆ  ತೆರಳಲು ಸುಮಾರು  80ರಿಂದ 150 ರೂ.ನಂತೆ ನೀಡಬೇಕಿದೆ.  ಪ್ರತಿನಿತ್ಯ ಇಷ್ಟೊಂದು ಮೊತ್ತ ಪಾವತಿಸಿ ಶಾಲೆಗೆ ಬರುವುದು ಮಕ್ಕಳಿಗೆ ಕಷ್ಟವೆನಿಸಿದೆ

ಈ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಈ ಹಿಂದೆ 8.15ಕ್ಕೆ ಮತ್ತಿಕಟ್ಟೆ, ಬಾಳೂರು, 9ಗಂಟೆಗೆ ಬಣಕಲ್ ಗೆ ಬಸ್‌ ಬರುತ್ತಿತ್ತು. ಮಕ್ಕಳು ಸರಿಯಾದ ಸಮಯಕ್ಕೆಶಾಲೆಗೆ ಹೋಗಲು ಅನುಕೂಲವಾಗಿತ್ತು ಆದರೆ ಲಾಕ್‌ಡೌನ್‌ ಸ್ಥಗಿತಗೊಂಡ ನಂತರ ಮತ್ತೆ ಆರಂಭಗೊಂಡ ಬಸ್ ಈಗ ಸಮಯಕ್ಕೆ ಸರಿಯಾಗಿ ಬಾರದೆ ಶಾಲೆಗೆ ತಲುಪಲು ಅನಾನುಕೂಲವಾಗಿದೆ. ಶಾಲಾ ಕಾಲೇಜುಗಳಲ್ಲಿ ಹೆಚ್ಚುವರಿ ತರಗತಿ, ಪ್ರಯೋಗ ತರಗತಿಗಳನ್ನು ನಡೆಸಿದರೆ ಮಕ್ಕಳಿಗೆ ಹೋಗಲು ಅನನುಕೂಲವಾಗುತ್ತಿದೆ.
ಕೊರೊನಾ ಸೋಂಕು, ಲಾಕ್‌ಡೌನ್‌ ಇತ್ಯಾದಿ ಕಾರಣಗಳಿಂದ ಎಲ್ಲರೂ  ಮೊದಲೇ ಆರ್ಥಿಕ ಸಮಸ್ಯೆಗೆ ಒಳಗಾಗಿದ್ದಾರೆ. ಈ ನಡುವೆ  ಮಕ್ಕಳ  ಶಾಲೆ ಕಾಲೇಜುಗಳ ಶುಲ್ಕಕ್ಕಿಂತ  ಬಾಡಿಗೆ ವಾಹನದ ಖರ್ಚು ದುಬಾರಿಯಾಗಿದ್ದು, ನಿತ್ಯ ಆಟೋ, ಖಾಸಗಿ ವಾಹನಗಳಲ್ಲಿ  ಮಕ್ಕಳನ್ನು ಶಾಲೆ ಕಾಲೇಜುಗಳಿಗೆ ಕಳಿಸುವ  ಪ್ರಯಾಣ ದರವೇ ದೊಡ್ಡ  ಹೊರೆಯಾಗಿದೆ ಎಂದು ಹೆತ್ತ ವರು ದೂರಿದ್ದಾರೆ.

ನಾವು ಹಲವು ಮಂದಿ ವಿದ್ಯಾರ್ಥಿಗಳು ನಗರದ ಶಾಲಾ ಕಾಲೇಜಿಗೆ ಹೋಗುತ್ತಿದ್ದೇವೆ. ಸರಿಯಾದ ಸಮಯಕ್ಕೆ  ಬಸ್‌ ಇಲ್ಲದೆ ತರಗತಿ ತಲುಪುವಲ್ಲಿ ಸಮಸ್ಯೆಯಾಗುತ್ತಿದೆ. ಇದರಿಂದ ನಮ್ಮ  ಕಲಿಕೆ ಕುಂಠಿತವಾಗುತ್ತಿದೆ.ಎಂದು ಬಣಕಲ್ ಹೈ ಸ್ಕೂಲ್ ವಿದ್ಯಾರ್ಥಿ ದಿನೇಶ್ ಮತ್ತಿಕಟ್ಟೆ ಅಳಲು ತೋಡಿಕೊಂಡರು

ಬಸ್‌ ಸಮಸ್ಯೆ  ನಿವಾರಣೆಗೆ ಸಂಬಂಧಿಸಿದವರ ಜತೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಲು ಶ್ರಮಿಸುವೆ.–ಸತೀಶ್‌ ,  ಗ್ರಾ.ಪಂ. ಅಧ್ಯಕ್ಷ, ಬಣಕಲ್