ಗುಣಮಟ್ಟದ ರಸ್ತೆ ನಿರ್ಮಿಸದಿದ್ದರೆ ಬಣಕಲ್ ಸಂತೆ ರಸ್ತೆ ಕಾಮಗಾರಿ ಕೆಲಸ ಪ್ರಾರಂಭಿಸಲು ಬಿಡುವುದಿಲ್ಲ

ಬಣಕಲ್ :ಬಣಕಲ್ ಗ್ರಾಮ ಪಂಚಾಯಿತಿ ಪಕ್ಕದಲ್ಲಿ ಹಾದು ಹೋಗಿರುವ ರಸ್ತೆಗೆ ಡಾಂಬರ್ ಕಾಣದೆ ದಶಕಗಳೇ ಉರುಳಿದೆ. ಗ್ರಾಮಸ್ಥರು ಹಲವು ಬಾರಿ ಹೊರಟ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲಿ ಅದೆ ಗುಂಡಿ ಬಿದ್ದ ರಸ್ತೆಯಲ್ಲೆ ಜನರು ಹಿಡಿ ಶಾಪ ಹಾಕುತ್ತ ಇಷ್ಟು ವರ್ಷ ಓಡಾಡಿಕೊಂಡಿದ್ದರು…

ಕೆಲವು ತಿಂಗಳ ಹಿಂದೆಯಷ್ಟೇ ಈ ರಸ್ತೆ ಕಾಮಗಾರಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದ್ದರು. ಅದರ ಪ್ರಕಾರ ರಸ್ತೆ ಕಾಮಗಾರಿ ಪ್ರಾರಂಭ ಮಾಡಿದ್ದಾರೆ.

ಆದರೆ ರಸ್ತೆ ಕಾಮಗಾರಿ ಗುಣ ಮಟ್ಟದ ಬಗ್ಗೆ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ..ಕಾರಣ ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ ಎಂದು ಗ್ರಾಮಸ್ಥರು ತಡೆ ಒಡ್ಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರಾಮಸ್ಥ ವಿನಯ್ ಶೆಟ್ಟಿ ದಶಕಗಳಿಂದ ಗ್ರಾಮಸ್ಥರು ಗುಂಡಿ ಬಿದ್ದ ರಸ್ತೆಯಲ್ಲೇ ಓಡಾಡಿ ಕೊಂಡಿದ್ದಾರೆ.ರಸ್ತೆ ನಿರ್ಮಿಸುವಂತೆ ಹಲವು ಬಾರಿ ನಾವು ಹಿಂದಿನ ಶಾಸಕರನ್ನು ಭೇಟಿ ಮಾಡಿ ರಸ್ತೆ ದುರಸ್ತಿ ಮಾಡುವಂತೆ ಮನವಿ ಮಾಡಿದ್ದೆವು ಆದರೆ ನಮ್ಮಮನವಿಗೆ ಸ್ಪಂದನೆ ಸಿಕ್ಕಿರಲಿಲ್ಲ ಕೊನೆಗೂ ಮಾನ್ಯ ಶಾಸಕರು ನೂತನ ರಸ್ತೆ ಕಾಮಗಾರಿಗೆ ಉದ್ಘಾಟನೆ ಮಾಡಿದ್ದರು. ಆದರೆ ರಸ್ತೆ ದುರಸ್ತಿಗೆ ಬಿಡುಗಡೆಯಾಗಿರುವ ಮೊತ್ತ ಕೇವಲ 10ಲಕ್ಷ ಅನುದಾನದಲ್ಲಿ ಮುಖ್ಯ ರಸ್ತೆ ಹಾಗೂ ಸಂತೆ ರಸ್ತೆ ಎರಡೂ ಒಮ್ಮೆಲೇ ಮಾಡಲು ಮುಂದಾಗಿದ್ದಾರೆ. ನಮ್ಮ ಬೇಡಿಕೆ ಇರುವುದು ಈಗಿರುವ ಅನುದಾನವನ್ನು ಮುಖ್ಯ ರಸ್ತೆಗೆ ಉಪಯೋಗಿಸಿ ಗುಣ ಮಟ್ಟದ ರಸ್ತೆ ನಿರ್ಮಿಸಿ ಇಲ್ಲವಾದಲ್ಲಿ ರಸ್ತೆ ಕಾಮಗಾರಿ ಮಾಡುವುದೇ ಬೇಡ ಎಂದರು.

ಮಾನ್ಯ ಜನಪ್ರಿಯ ಶಾಸಕರೇ ನಿಮ್ಮ ಕಾಲದಲ್ಲಾದರೂ ಉತ್ತಮ ಗುಣಮಟ್ಟದ ಕೆಲಸಗಳು ನಡೆಯುತ್ತದೆ ಎಂಬ ನಂಬಿಕೆ ಇತ್ತು ಆದರೆ ನೀವು ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿ ಈಗ ಪ್ಯಾಚ್ ವರ್ಕ್ ಮಾಡಿಸುತ್ತಿರುವುದು ನಮಗೆ ನಿಮ್ಮ ಮೇಲಿನ ನಂಬಿಕೆ ಹೋಗಿದೆ. ದಯವಿಟ್ಟು ನಿಮ್ಮ ಮೇಲಿನ ವಿಶ್ವಾಸ ಉಳಿಸಿಕೊಳ್ಳಿ ನಾವು ಈಗಲೂ ಕೂಡ ಉತ್ತಮ ಶಾಸಕಿ ನಮ್ಮ ಭಾಗಕ್ಕೆ ದೊರಕಿದ್ದಾರೆ ನಿಮ್ಮ ಕಾಲದಲ್ಲಾದರೂ ಉತ್ತಮ ಕಾರ್ಯಗಳು ನಡೆಯುತ್ತದೆ ಎಂಬ ನಿರೀಕ್ಷೆಯಲ್ಲಿದ್ದೆವು ಆದರೆ ಈ ಕೆಲಸಗಳನ್ನು ನೋಡಿ ಎಲ್ಲಾ ರಾಜಕಾರಣಿಗಳಂತೆ ನೀವು ಕೂಡ ಎಂದು ನಾವು ಭಾವಿಸಬೇಕಾಗಿದೆ
ದಯಮಾಡಿ ಗುಣಮಟ್ಟದ ರಸ್ತೆ ಮಾಡಿ ಇಲ್ಲವೇ ಕಾಮಗಾರಿ ಮಾಡಲು ಬಿಡುವುದಿಲ್ಲ ಎಂದರು..

ವರದಿ ✍️ಸೂರಿ ಬಣಕಲ್