ಹದೆಗೆಟ್ಟರಸ್ತೆಗೆ ಸದ್ಯದಲ್ಲೇ ಡಾಂಬರೀಕರಣ ಭಾಗ್ಯ:ಶಾಸಕರಾದ ನಯನ ಮೋಟಮ್ಮರವರಿಂದ ಗುದ್ದಲಿ ಪೂಜೆ
ಬಣಕಲ್: ಕಳೆದ 30ವರ್ಷಗಳಿಂದ ಡಾಂಬರಿಕರಣ ಕಾಣದೆ ಹದಗೆಟ್ಟಿದ್ದ ಬಣಕಲ್ ಮತ್ತಿಕಟ್ಟೆ ಮುಖ್ಯರಸ್ತೆ ಯಿಂದ ಸಂತೆ ಶುಭಾಷ್ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಹಾಗು ಮತ್ತಿಕಟ್ಟೆ ಮುಖ್ಯರಸ್ತೆ ಯಿಂದ ಬಿ.ಹೊಸಹಳ್ಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಶಾಸಕರಾದ ಶ್ರೀಮತಿ ನಯನಮೋಟಮ್ಮ ರವರು ಗುದ್ದಲಿ ಪೂಜೆ ನೆರವೇಸಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿ ಸುಮಾರು 30 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಈ ಎರಡು ರಸ್ತೆಗಳು ನಮ್ಮ ತಾಯಿಯವರು ಶಾಸಕರಾಗಿದ್ದಾಗ ಡಾಂಬರೀಕರಣ ಕಂಡಂತವು ನನ್ನ ಅವಧಿಯಲ್ಲಿ ಮತ್ತೊಮ್ಮೆ ಕಾಂಕ್ರಿಟೀಕರಣ ಗೊಳ್ಳುತ್ತಿರುವುದು ಸಂತೋಷ ತಂದಿದೆ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಿದ್ದೇನೆ ಗುಣಮಟ್ಟದ ರಸ್ತೆ ಆಗಬೇಕಾದರೆ ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದರು ನಂತರ ಮನವಿಗಳನ್ನು ಸ್ವೀಕರಿಸಿ ಸಕಾರಾತ್ಮಕವಾಗಿ ಸ್ಪಂದಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ತ್ರಿಪುರ ಹೋಬಳಿ ಕಾಂಗ್ರೆಸ್ ಅಧ್ಯಕ್ಷರು, ಗ್ರಾ.ಪಂ.ಅಧ್ಯಕ್ಷರುಗಳಾದ ಜರೀನ,ಆಶ್ರಿತ್,ಉಪಾಧ್ಯಕ್ಷರಾದ ಲೀಲಾವತಿ, ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿಗಳಾದ ದೇವರಾಜ್ ಸಬ್ಲಿ ,ಮುಖಂಡರುಗಳಾದ ಬಿ.ಸಿ.ಪ್ರವೀಣ್,ಸುಂದರೇಶ್ ಕುಂದೂರು,ವೆಂಕಟೇಶ್, ಶಿವರಾಂ ಶೆಟ್ಟಿ,ಅರುಣ್ ಗುತ್ತಿ, ಮೆಲ್ವಿನ್,ದಿಲ್ದಾರ್ ಬೇಗಂ, ಇರ್ಫಾನ್,ವಿನಯ್ ಕುಮಾರ್, ಆತಿಕ ಬಾನು,ಸುರೇಶ್, ಪೌಲ್ಸನ್,ಪಿಡಿಓ ಕೃಷ್ಣಪ್ಪ, ಉಮ್ಮರ್,ಮುಂತಾದವರಿದ್ದರು