ಸಂವಿಧಾನ ಶಿಲ್ಪಿ’ ಡಾ.ಬಿ. ಆರ್.ಅಂಬೇಡ್ಕರ್ ಜಯಂತಿ: ಸಬ್ಳಿಗ್ರಾಮಸ್ಥರಿಂದ ಬಣಕಲ್ ನಲ್ಲಿ ಮೆರವಣಿಗೆ

ಬಣಕಲ್: ಭಾರತದ ಸಂವಿಧಾನ ಶಿಲ್ಪಿ, ಸಮಾಜ ಸುಧಾರಕ ಹಾಗೂ ಅರ್ಥಶಾಸ್ತ್ರಜ್ಞರಾದ ಬಿ. ಆರ್. ಅಂಬೇಡ್ಕರ್ ಅವರ 133ನೇ ಜನ್ಮದಿನವಾಗಿದ್ದು, ದೇಶದ ವಿವಿಧೆಡೆ ಅಂಬೇಡ್ಕರ್ ಜಯಂತಿ ಆಚರಿಸಲಾಗುತ್ತಿದೆ.

ಇಂದು ಅಂಬೇಡ್ಕರ್ ಜಯಂತಿ ಪ್ರಯುಕ್ತ ಬಣಕಲ್ ನಲ್ಲಿ ಗ್ರಾಮಸ್ಥರು ವಾದ್ಯ ಗೋಷ್ಠಿಗಳೊಂದಿಗೆ ಮೆರವಣಿಗೆ ನಡೆಸಿದರು. ವಾಹನದಲ್ಲಿ ಅಂಬೇಡ್ಕರ್ ಭಾವಚಿತ್ರದೊಂದಿಗೆ ಸಬ್ಳಿಯಿಂದ ಬಣಕಲ್ ವರೆಗೆ ಗ್ರಾಮಸ್ಥರು ನರ್ತ್ಯಮಾಡುತ್ತ ಜೈಕಾರ ಕೂಗುತ್ತ ಮೆರವಣಿಗೆ ಸಾಗಿದರು.

ಈ ಸಂದರ್ಭದಲ್ಲಿ ಮಹಿಳೆಯರು ಪುರುಷರು ಮಕ್ಕಳು ಅಂಬೇಡ್ಕರ್ ಭಾವ ಚಿತ್ರ ಕೈಯಲ್ಲಿ ಹಿಡಿದು ಕೊಂಡು ಮೆರವಣಿಗೆಯಲ್ಲಿ ಸಾಗಿದರು .

ಸಬ್ಳಿದೇವರಾಜ್ ಮಾತನಾಡಿ ಅಂಬೇಡ್ಕರ್ ಅವರು ಸಮಾನತೆ ಮತ್ತು ಬ್ರಾತೃತ್ವದಲ್ಲಿ ದೃಢ ನಂಬಿಕೆ ಹೊಂದಿದ್ದರು. ಅವರ ವಿಚಾರಗಳನ್ನು ಅನುಸರಿಸಿಕೊಂಡು ಹೋಗೋಣ. ದಬ್ಬಾಳಿಕೆಯ ವಿರುದ್ಧ ಹೋರಾಡಿದ ಮತ್ತು ಸಮಾನತೆಯ ಮಹತ್ವವನ್ನು ಬೋಧಿಸಿದ ವಿಶ್ವದ ಶ್ರೇಷ್ಠ ವ್ಯಕ್ತಿ ಡಾ.ಬಿ. ಆರ್. ಅಂಬೇಡ್ಕರ್ ಅವರ ಜಯಂತಿಯಂದು, ಅವರಿಂದ ಪ್ರೇರಣೆ ಪಡೆದು ದೇಶದ ಪ್ರಗತಿಗೆ ಸಹಕರಿಸೋಣ ಎಂದರು.

ವರದಿ :ಸೂರಿ ಬಣಕಲ್