ಶಿವರಾತ್ರಿ ಹಬ್ಬದ ಪ್ರಯುಕ್ತ ಬಣಕಲ್ ಶ್ರೀ ಕಲ್ಲನಾಥೇಶ್ವರ ಸ್ವಾಮಿ ದೇವಸ್ಥಾನದ ವತಿಯಿಂದ ನಡೆಯುವ ಕಾರ್ಯಕ್ರಮಗಳು

ಬಣಕಲ್ :ಮೂಡಿಗೆರೆ ತಾಲ್ಲೂಕು ಬಣಕಲ್ ಶ್ರೀ ಕಲ್ಲನಾಥೇಶ್ವರ ಸ್ವಾಮಿಯ ಈ ವರ್ಷದ ಶಿವರಾತ್ರಿಯ ಜಾತ್ರಾ ಮಹೋತ್ಸವವು ಈ ಕೆಳಕಂಡ ಕಾರ್ಯಕ್ರಮದಂತೆ ಜರುಗಲಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಿದೆ.

ಶಿವರಾತ್ರಿ ಹಬ್ಬದ ಪೂಜೆ ಹಾಗೂ ಜಾತ್ರೆಯ ಕಾರ್ಯಕ್ರಮಗಳು ಈ ಕೆಳಕಂಡಂತಿವೆ.

ದಿನಾಂಕ 8/03/2024, ಶುಕ್ರವಾರ, ಶಿವಾಗ (ಮಹಾ ಶಿವರಾತ್ರಿ), ದಿನಾಂಕ 9/03/2024, ಶನಿವಾರ,ಬೆಳಗಿನ 8 ಗಂಟೆಗೆ ಕಲಾವೃಧ್ಧಿ ಹೋಮ, ನಂತರ ಗಿರಿಜಾ ಕಲ್ಯಾಣ ಕಾರ್ಯಕ್ರಮ ಅದರ ಪ್ರಯುಕ್ತ ಮಧ್ಯಾಹ್ನದ ಭೋಜನ, ( ಭೋಜನದ ಸೇವಾರ್ಥದಾರರು : ಶ್ರೀಮತಿ ಮತ್ತು ಶ್ರೀ ಬಿ.ಎನ್.ದಿವ್ಯಪ್ರಸಾದ್ ಮತ್ತು ಮಕ್ಕಳು, ಬಣಕಲ್) ದಿನಾಂಕ 10/03/2024 ಭಾನುವಾರ, ಜಾತ್ರಾ ಮಹೋತ್ಸವ, (ಈ ದಿನ ಮಧ್ಯಾಹ್ನದ ಫಲಹಾರದ ಸೇವಾರ್ಥದಾರರು: ದಿ: ಬಿ.ಎಸ್.ನರೇಂದ್ರ ಗೌಡರ ಸ್ಮರಣಾರ್ಥ, ಅವರ ಪುತ್ರ ಶ್ರೀ ಬಿ.ಎನ್. ಸಂಜಯ್ ಮತ್ತು ಕುಟುಂಬದವರು ಬಣಕಲ್) ದಿನಾಂಕ 11/03/2024, ಸೋಮವಾರ ನೀರೋಕಳಿ (ಅವಭೃತ ಸ್ನಾನ),ಈ ಎಲ್ಲಾ ಕಾರ್ಯಕ್ರಮಗಳು ನಮ್ಮ ಶ್ರೀ ಕಲ್ಲನಾಥೇಶ್ವರ ಸ್ವಾಮಿ ದೇವಸ್ಥಾನ, ಬಣಕಲ್ ವಿಲೇಜ್,ಆವರಣದಲ್ಲಿ ನಡೆಯಲಿವೆ.

ಈ ಕಾರ್ಯಕ್ರಮಗಳಲ್ಲಿ ತಾವೆಲ್ಲರೂ ಭಾಗವಹಿಸಿ ಶ್ರೀ ಕಲ್ಲನಾಥೇಶ್ವರ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಈ ಮೂಲಕ ವಿನಂತಿಸುತ್ತಿದ್ದೇವೆ,ವಂದನೆಗಳೊಂದಿಗೆ,ಶ್ರೀ ಕಲ್ಲನಾಥೇಶ್ವರ ಸ್ವಾಮಿ ದೇವಸ್ಥಾನ ಸಮಿತಿ, ಮತ್ತು ಗ್ರಾಮಸ್ಥರು,ಬಣಕಲ್ ವಿಲೇಜ್