ಬಣಕಲ್ :ಸಂತೆ. ಸುಭಾಷ್ ನಗರ. ಗುಡ್ಡಟ್ಟಿ. ಸಂಪರ್ಕಿಸುವ ರಸ್ತೆಗೆ ಹಸಿರು ತೋರಣ ಕಟ್ಟಿ ಹೂವಿನ ಹಾರಗಳಿಂದ ಸಿಂಗರಿಸಿ ರಸ್ತೆ ದುರಸ್ತಿಗೆ ಅಗ್ರಹಿಸಿ ಬಣಕಲ್ ಸಾರ್ವಜನಿಕರು ಇಂದು ವಿನೂತನ ಪ್ರತಿಭಟನೆ ಮಾಡುವ ಮೂಲಕ ಗಮನ ಸೆಳೆದರು.
ಸಂತೆ ಸುಭಾಸ್ ನಗರ ಗುಡ್ಡಹಟ್ಟಿ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟು 20ವರ್ಷಗಳೇ ಕಳೆದಿವೆ ಆದರೇ ಇದುವರೆಗೂ ಯಾವೊಬ್ಬ ಜನ ಪ್ರತಿನಿಧಿಗಳು ಕೂಡ ಇದರ ಬಗ್ಗೆ ಇದುವರೆಗೂ ತಲೇನೆ ಕೆಡಿಸಿಕೊಂಡಿಲ್ಲ ಇದರಿಂದ ಬೆಸೆತ್ತ ಸುಭಾಷ್ ನಗರ ಗುಡ್ಡಹಟ್ಟಿಹಾಗೂ ಬಣಕಲ್ ಯುವಕರು ಇಂದು ರಸ್ತೆಗೆ ತೋರಣ ಕಟ್ಟಿ ರಸ್ತೆಯ ಮೇಲೆ ಹೂ ಗುಚ್ಚಗಳನ್ನು ಸುರಿದು ಅದರ ಮೇಲೆ ನಡೆಯುವ ಮೂಲಕ ವಿಭಿನ್ನ ವಾಗಿ ಉದ್ಘಾಟಿಸಿ ಪ್ರತಿಭಟಿಸಿದರು. ನಂತರ ಮಾತನಾಡಿದ ಮುಖಂಡರಾದ ವಿಕ್ರಂ ಗೌಡರು ತಮಗೆ ಯಾವುದೇ ವ್ಯಕ್ತಿ, ರಾಜಕೀಯ ಪಕ್ಷ ಕುರಿತ ರಾಗ ದ್ವೇಷಗಳಿಂದ ತಾವು ಪ್ರತಿಭಟನೆಗೆ ಮುಂದಾಗಿಲ್ಲ, ನಮಗೆ ಎಲ್ಲರೂ ಒಂದೇ, ನಮ್ಮವರೇ. ನಮ್ಮ ಮೂಲ ಉದ್ದೇಶ ಜನಪ್ರತಿನಿದಿಗಳ ಗಮನ ಸೆಳೆಯುವುದು ಮಾತ್ರವಾಗಿದೆ ಎಂದ ಅವರು,
ಈ ರಸ್ತೆಯನ್ನು ಮೂವತ್ತು ವರ್ಷಗಳಿಂದಲೂ ನಿರ್ಲಕ್ಷಿಸಲಾಗುತ್ತಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ರಸ್ತೆ ದುರವಸ್ಥೆ ಬಣಕಲ್ ಘನತೆಗೆ ಧಕ್ಕೆ ತರುವಂತಿದೆ. ಹೊರ ಊರುಗಳಿಂದ ಬರುವ ನೆಂಟರಿಷ್ಟರು ನಮ್ಮನ್ನು ಅಣಕಿಸುವ ರೀತಿಯಲ್ಲಿದೆ. ಇಲ್ಲಿನ ಸ್ಥಿತಿಗತಿ ರಸ್ತೆಗೆ ಮೊದಲ ಆದ್ಯತೆ ನೀಡಿ ದುರಸ್ಥಿಗೊಳಿಸಿ ಎಂದು ಆಗ್ರಹಿಸಿದರು. ನಂತರ ಬಂದಂತಹ ಅತಿಥಿಗಳಿಗೆ ತಂಪಾದ ಮಜ್ಜಿಗೆ ನೀಡಲಾಯಿತು. ಈ ಸಂದರ್ಭದಲ್ಲಿ ಅರುಣ್ ಪೂಜಾರಿ. ಯೋಗೇಶ್. ಅಭಿ, ಸಿದ್ದಿಕ್.ಜಗದೀಶ್. ಸಚಿನ್. ಸಂದೀಪ್.ರಂಗನಾಥ್. ರಾಜೇಶ್. ಪ್ರಕಾಶ್. ಮುಂತಾದವರಿದ್ದರು.