ಬಣಕಲ್ :ಇಂದು ಮೂಡಿಗೆರೆ ತಾಲೂಕು ಬಣಕಲ್ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟ ದ ಒಕ್ಕೂಟದ ಸಹಯೋಗದೊಂದಿಗೆ ಮಾಸಿಕ ಸಂತೆ ಕಾರ್ಯಕ್ರಮವನ್ನು ಮೂಡಿಗೆರೆ ತಾಲೂಕಿನ ಮಾನ್ಯ ಶಾಸಕರಾದ ಶ್ರೀಮತಿ ನಯನ ಮೋಟಮ್ಮ ರವರು ಹಾಗೂ ಸಂಜೀವಿನಿ ಒಕ್ಕೂಟದ ಅದ್ಯಕ್ಷರಾದ ಆಶಾ, ತಾಲೂಕು ಪಂಚಾಯಿತಿಯ ಕಾರ್ಯ ನಿರ್ವಾಹಕ ಅಧಿಕಾರಿ ಶ್ರೀಮತಿ ದಯಾವತಿ ,ಹಾಗೂ ಬಣಕಲ್ ಪಂಚಾಯಿತಿ ಅಧ್ಯಕ್ಷರಾದ ಆತಿಕ ಬಾನು, ಉಪಾಧ್ಯಕ್ಷರಾದ ಆದಮ್ ಹಾಗೂ ಚುನಾಯಿತ ಪ್ರತಿನಿಧಿಗಳು, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶಾಲಿನಿ,ಹಾಗೂ ಪಂಚಾಯಿತಿ ಪಿಡಿಒ ,ಕೃಷ್ಣಪ್ಪ ಸಿಬ್ಬಂದಿ ವರ್ಗದವರು ,ಹಾಗೂ ಸಂಜೀವಿನಿ ಒಕ್ಕೂಟದ ಎಂ ಬಿ ಕೆ. ಎಲ್ ಸಿ ಆರ್ ಪಿ. ಕೃಷಿ ಸಖಿ ಹಾಗೂ ಸದಸ್ಯರು ಟೇಪ್ ಕತ್ತರಿಸುವ ಮುಖಾಂತರ ಚಾಲನೆ ನೀಡಲಾಯಿತು.
ಈ ಒಂದು ಕಾರ್ಯಕ್ರಮದಲ್ಲಿ ಮೂಡಿಗೆರೆ ತಾಲ್ಲೂಕು ಕಾರ್ಯ ನಿರ್ವಾಹಕ ಅಧಿಕಾರಿ ಅವರು ಪ್ರಾಸ್ತಾವಿಕ ನುಡಿಯನ್ನು ಆಡಿ ಸಂಜೀವಿನಿ ಒಕ್ಕೂಟದ ದ್ಯೆಯೋದ್ದೇಶಗಳು ರೂಪುರೇಷೆಗಳ ಬಗ್ಗೆ ಮಾತಾಡಿದರು. ಹಾಗೂ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಶಾಲಿನಿ ರವರು ಸತತ 2 ವರ್ಷಗಳಿಂದ NRLM ನಲ್ಲಿ ಮೂಡಿಗೆರೆ ಸಂಜೀವಿನಿ ಅಡಿಯಲ್ಲಿ ಆಗಿರುವ ಪ್ರಗತಿ ಹಾಗೂ ಅನುದಾನಗಳ ಬಳಕೆ ಕುರಿತು ತಿಳಿಸಿದರು.
ಲಿಂಗತ್ವ ದೌರ್ಜನ್ಯ ವಿರುದ್ಧ ಅಭಿಯಾನದ ಸಲುವಾಗಿ ಪ್ರತಿಜ್ಞೆ ಸ್ವೀಕಾರ ಮಾಡಲಾಯಿತು. ಹಾಗೂ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಮಾನ್ಯ ಶಾಸಕರ ಸಮ್ಮುಖದಲ್ಲಿ ಬಹುಮಾನ ವಿತರಣೆ ಮಾಡಲಾಯಿತು.ಹಾಗೂ ಹಾಗೂ ಸ್ಮರಣಿಕೆ ನೀಡುವುದರ ಮುಖಾಂತರ ಮಾನ್ಯ ಶಾಸಕರಾದ ಶ್ರೀಮತಿ ನಯನ ಮೋಟಮ್ಮ ರವರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಈ ಸಂತೆ ಕಾರ್ಯಕ್ರಮದಲ್ಲಿ 25 ಮಳಿಗೆಗಳು ಭಾಗವಹಿಸಿದ್ದವು.ಹಾಗೂ ಸದಸ್ಯರು 55,000/- ರೂ ಗಳ ಆದಾಯ ಗಳಿಸುವುದರ ಮೂಲಕ ಸಂತೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.
ಈ ಒಂದು ಕಾರ್ಯಕ್ರಮದಲ್ಲಿ BM NON FARM ಮನೋಜ್ ವಲಯ ಮೇಲ್ವಚಾರಕರಾದ ಅಬ್ದುಲ್ ನಾಜಿಮ್ ,ಅಭಿಜಿತ್ ರವರು ಹಾಜರಿದ್ದರು.