ಬಣಕಲ್ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಕಳೆಗಟ್ಟಿದ ನವರಾತ್ರಿ ಸಂಭ್ರಮ: ಮತ್ತಿಕಟ್ಟೆ ಶ್ರೀ ವೈದ್ಯನಾಥ ಭಜನಾ ಮಂಡಳಿ ವತಿಯಿಂದ ಕುಣಿತ ಭಜನೆ

ಬಣಕಲ್ :ನವರಾತ್ರಿ ಪ್ರಯುಕ್ತ ಬಣಕಲ್ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಇಂದು ಕುಣಿತ ಭಜನೆ ಮತ್ತು ಭಜನಾ ಕಾರ್ಯಕ್ರಮ ನಡೆಯಿತು.

ಮತ್ತಿಕಟ್ಟೆಯ ಶ್ರೀ ವೈದ್ಯನಾಥ ಭಜನಾ ಮಂಡಳಿ ವತಿಯಿಂದ ಶುಕ್ರವಾರ ರಾತ್ರಿ ಬಣಕಲ್ ನ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಮನಮೋಹಕ ನೃತ್ಯ ಭಜನೆ ಹಾಗೂ ಭಕ್ತಿ ಪೂರ್ವಕ ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು,ದೇವರ ಕೀರ್ತನೆಗಳು, ಗಾಯಿತ್ರಿ ಸ್ತೋತ್ರ ಹಾಗೂ ಅನೇಕ ದೇವರ ಕೀರ್ತನೆಗಳನ್ನು ಹಾಡಿ ನೆರೆದಿದ್ದ ಭಕ್ತರಿಗೆ ಭಕ್ತಿಯ ಲಯದಲ್ಲಿ ತೇಲುವಂತೆ ಮಾಡಿದರು.

ಪ್ರತಿ ವರ್ಷವೂ ಬಣಕಲ್ ಶ್ರೀ ಮಹಮ್ಮಾಯಿ ದೇವಸ್ಥಾನದಲ್ಲಿ ಒಂಬತ್ತು ದಿನಗಳ ಕಾಲ ಅದ್ದೂರಿಯಾಗಿ ನವರಾತ್ರಿ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದ್ದಾರೆ. ಅದೇ ರೀತಿ ಈ ವರ್ಷವೂ ಸಹ ಒಂಬತ್ತು ದಿನಗಳ ಕಾಲ ನಡೆಯುವ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿಂದ ಆಯೋಜನೆ ಮಾಡಿ ದೇವಸ್ಥಾನದ ಆಡಳಿತ ಮಂಡಳಿ ಭಕ್ತರಿಗೆ ಹಬ್ಬದ ರಸದೌತಣವನ್ನು ನೀಡುತ್ತಿದ್ದಾರೆ.

ವರದಿ :✍️ಸೂರಿ ಬಣಕಲ್