ಬಣಕಲ್ :ಕಳೆದ ಒಂದು ವರ್ಷದಿಂದ ಪರಿಹಾರ ಕಾಣದೆ ಇದ್ದ ಸಮಸ್ಯೆ ಕ್ಷಣಾರ್ದದಲ್ಲಿ ಇತ್ಯಾರ್ಥವಾದ ಘಟನೆ ಬಣಕಲ್ ಪಟ್ಟಣದಲ್ಲಿ ನಡೆದಿದೆ. .ಕಳೆದ ಒಂದು ವರ್ಷದಿಂದ ಬಣಕಲ್ ಮುಖ್ಯ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಆಮೇಗತಿಯಲ್ಲಿ ಸಾಗುತಿತ್ತು.ಬಣಕಲ್ ನ ಎಲ್ಲಾ ಸರ್ವಿಸ್ ರಸ್ತೆಗಳನ್ನು ಕಾಮಗಾರಿ ಸಮಯದಲ್ಲಿ ಬಾಕ್ಸ್ ಚರಂಡಿ ನಿರ್ಮಿಸಲು ರಸ್ತೆಯನ್ನು ಅಗೆದು ಹಾಗೆ ಬಿಟ್ಟಿದ್ದರು.ತಿಂಗಳು ಕಳೆದರೂ ಸರಿ ಮಾಡುವ ಗೋಜಿಗೆ ಹೋಗಿರಲಿಲ್ಲ..ರಸ್ತೆ ನಿರ್ಮಿಸುವಾಗ ಕೆಂಬಲ್ ಮಠ ಮೂಲಕ ಗುಡ್ಡೆಟ್ಟಿ ಹೋಗುವ ಮುಖ್ಯ ರಸ್ತೆಯನ್ನು ಕಳೆದ ಒಂದು ವರ್ಷದಿಂದ ಕಾಮಗಾರಿ ಮಾಡದೇ ನಿರ್ಲಕ್ಷ ವಹಿಸಿದ್ದರು ವರ್ಷ ಕಳೆದರೂ ಪರ್ಯಾಯ ವ್ಯವಸ್ಥೆ ಮಾಡದೇ ಇರುವ ಬಗ್ಗೆ ಗ್ರಾ. ಪಂ.ಸದಸ್ಯಮಧು ರವರು ಹಲವಾರು ಬಾರಿ ಅಧಿಕಾರಿಗಳನ್ನು ಸಂಪರ್ಕಿಸಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ ಇದರಿಂದ ಬೆಸೆತ್ತ ಜನತೆ ಕಾಮಗಾರಿ ವಿರುದ್ಧ ಹಿಡಿಶಾಪ ಹಾಕಿದ್ದರು.ಪೆಟ್ರೋಲ್ ಬಂಕ್ ಮುಂಭಾಗ ಇಂದು ರಸ್ತೆ ಕಾಮಗಾರಿ ನಡೆಯುವ ಸ್ಥಳಕ್ಕೆ ಬಣಕಲ್ ಗ್ರಾಮ ಪಂಚಾಯಿತಿ ಸದಸ್ಯ ಮಧುಕುಮಾರ್ ರವರು ಬಣಕಲ್ ಯುವಕರೊಂದಿಗೆ ಸ್ಥಳಕ್ಕೆ ಭೇಟಿ ಕೊಟ್ಟು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ತಕ್ಷಣಕ್ಕೆ ಕಾಮಗಾರಿ ಆಗಬೇಕೆಂದು ಪಟ್ಟು ಹಿಡಿದರು ಇದರಿಂದ ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಸರ್ವಿಸ್ ರಸ್ತೆ ಕಾಮಗಾರಿ ಯುವಕರ ಮುತುವರ್ಜಿಯಿಂದ ಕೇವಲ ಒಂದು ತಾಸಿನಲ್ಲಿ ಜೇಸಿಬಿ ಮುಖಾಂತರ ಗುಂಡಿ ಬಿದ್ದ ರಸ್ತೆಯನ್ನು ಸಮತಟ್ಟು ಮಾಡಿ . ವಾಹನಗಳಿಗೆ ತಿರುಗಾಡಲು ಅನುವು ಮಾಡಿಕೊಟ್ಟರು ಗ್ರಾಮ ಪಂಚಾಯಿತಿ ಸದಸ್ಯ ಮಧುಕುಮಾರ್ ಹಾಗೂ ಬಣಕಲ್ ಯುವಕರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಅರುಣ್ ಪೂಜಾರಿ, ಮಣಿಕಂಠ, ಸಂದೀಪ್, ಸಚಿನ್, ವಿಶ್ವಾಸ್,ಕಿರಣ್, ಅರುಣ್ ರೋಡ್ರಿಗಸ್, ರಿಯಾಜ್,ರಘು, ಮುಂತಾದವರಿದ್ದರು
