ಸರಳತೆ ಮತ್ತು ಬ್ರಷ್ಟಚಾರ ಮುಕ್ತ ಆಡಳಿತ ನೀಡಿದ ಪ್ರಾಣೇಶ್ ಅವರು ಮತ್ತೊಮ್ಮೆ ವಿಧಾನ ಪರಿಷತ್ ಸದಸ್ಯರಾಗಿ ಮತ್ತೆ ಆಯ್ಕೆ ಆಗಲಿದ್ದಾರೆ ಎಂದು ಬಾಳೂರು ಹೋಬಳಿಯ ಜಾವಳಿಯಲ್ಲಿ ವಿಧಾನ ಪರಿಷತ್ ಚುನಾವಣೆಗೆ ಮತ ಯಾಚಿಸಿ ಮಾತನಾಡಿದ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಪ್ರಾಣೇಶ್ ತಮ್ಮ ಆರು ವರ್ಷಗಳ ಅವಧಿಯಲ್ಲಿ ಅನುಧಾನವನ್ನು ಸಮರ್ಥವಾಗಿ ಬಳಸಿದ್ದಾರೆ ,ಜಿಲ್ಲೆಯ ಅಭಿವೃದ್ಧಿಗಾಗಿ ಬಿಜೆಪಿ ಗೆಲ್ಲಿಸಿ ,ಈ ಸಲ ಭಾರಿ ಅಂತರದಿಂದ ಗೆಲುವು ಸಾದಿಸಲಿದ್ದೇವೆ ಎಂದರು
ಬಿಜೆಪಿ ತಾಲೂಕು ಅಧ್ಯಕ್ಷ ರಘು ಜನ್ನಾಪುರ, ಹಳಸೆ ಶಿವಣ್ಣ, ದುಂಡುಗ ಪ್ರಮೋದ್, ಶಶಿಧರ್, ಪರೀಕ್ಷಿತ್ ಜಾವಳಿ, ಪಂಚಾಕ್ಷರಿ, ಗಜೇಂದ್ರ, ಭರತ್ ಬಾಳೂರು, ವಿಜೇಂದ್ರ ಮರ್ಕಲ್, ವಿಕ್ರಂ ಬಣಕಲ್, ಕಲ್ಲೇಶ್ ಬಾಳೂರು, ಅರೆಕೂಡಿಗೆ ಶಿವಣ್ಣ, ಡಿ.ಎಸ್. ಸುರೇಂದ್ರ,ಕೆಂಜಿಗೆ ಕೇಶವ್,ಬಾಳೂರು ಹೋಬಳಿಯ ಎಲ್ಲಾ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಸದಸ್ಯರುಗಳು ಸಭೆಯಲ್ಲಿ ಇದ್ದರು
