ದೇವರ ಮನೆ ರಸ್ತೆಯಲ್ಲಿ ಆನೆ ಕಂಡು ಬೈಕ್ ಬಿಟ್ಟು ಓಡಿ ಜೀವ ಉಳಿಸಿಕೊಂಡ ಸವಾರ

ರಸ್ತೆಬದಿ ನಿಂತಿದ್ದ ಆನೆಯೊಂದು ಬೈಕ್​ ಸವಾರನನ್ನು ಓಡಿಸಿಕೊಂಡು ಹೋಗಿದ್ದು, ವ್ಯಕ್ತಿ ಎದ್ನೋ ಬಿದ್ನೋ ಎಂದು ಓಡಿ ಜೀವ ಉಳಿಸಿಕೊಂಡ ಘಟನೆ ದೇವರ ಮನೆಯಲ್ಲಿ ನಡೆದಿದೆ.

ಇಂದು ಸಂಜೆ 4ಗಂಟೆ ಸಮಯದಲ್ಲಿ ದೇವರ ಮನೆಗೆಂದು ಹೋಗುತ್ತಿದ್ದ ಬೈಕ್ ಸವಾರ ಆನೆಯನ್ನು ಗಮನಿಸದೆ ಬೈಕ್​ ಸವಾರ ತೆರಳಲು ಮುಂದಾಗಿದ್ದನು. ಈ ವೇಳೆ ಆನೆ ದಾಳಿ ಮಾಡಲು ಮುಂದಾಗಿದೆ. ಆಗ ಸವಾರ ಬೈಕ್ ಬಿಟ್ಟು ಓಡಿ ಹೋಗಿದ್ದಾನೆ. ಅದೃಷ್ಟವಶಾತ್ ಬೈಕ್ ಸವಾರ ಪ್ರಾಣಪಾಯದಿಂದ ಪಾರಾಗಿದ್ದಾನೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಧಾವಿಸಿ ಪರಿಶೀಲಿಸಿದ್ದಾರೆ.

ಕೋಗಿಲೆ ಗ್ರಾಮಸ್ಥ ಸಜಿತ್ ಮಾತನಾಡಿ ಈ ಭಾಗದಲ್ಲಿ ಕಾಡು ಪ್ರಾಣಿಗಳು ರಸ್ತೆ ಪಕ್ಕದಲ್ಲೇ ಅಡ್ಡಾಡುವುದು ಸರ್ವೇಸಾಮಾನ್ಯ. ಪ್ರವಾಸಿಗರು ದೇವರಮನೆಗೆ ಸಂಜೆ ಸಮಯದಲ್ಲಿ ಬರುವುದನ್ನು ನಿಲ್ಲಿಸಬೇಕು ಕಾಡು ಪ್ರಾಣಿಗಳು ಆಹಾರವನ್ನು ಅರಸಿ ನಾಡಿಗೆ ಬರುವುದು ಕೇಳುತ್ತಿರುತ್ತೇವೆ ಆದರೆ ಈ ಭಾಗ ಮೊದಲೇ ಕಾಡು ಅದರಿಂದ ನಾವುಗಳೇ ಎಚ್ಚರಿಕೆಯಿಂದ ಇದ್ದರೆ ಒಳ್ಳೆಯದು ಎಂದರು.

*ವರದಿ :ಸೂರಿ ಬಣಕಲ್*

Sahifa Theme License is not validated, Go to the theme options page to validate the license, You need a single license for each domain name.